‘ನನ್ನ ತೇಜಸ್ವಿ’ ನಾಟಕ ತುಮಕೂರಿನಲ್ಲಿ ಭರ್ಜರಿ ಯಶಸ್ಸು... ತುಮಕೂರು: ಕಲಾ ಮಾಧ್ಯಮ ತಂಡವರಿಂದ ನಿನ್ನೆ ನಗರದ ಕಸಾಪ ಭವನದಲ್ಲಿ ನಡೆದ ನನ್ನ ತೇಜಸ್ವಿ ನಾಟಕ ಪ್ರದರ್ಶನವು ತುಂಬಾ ಯಶಸ್ವಿಯಾಗಿ ಜನ ಮೆಚ್ಚುಗೆ ಗಳಿಸಿದೆ.
ಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅರಸೀಕೆರೆ ನಿಲ್ದಾಣದ ನಡುವೆ ಹೊಸ ಮೆಮು ರೈಲು ಓಡಿಸಲು ನಿರ್ಧರಿಸಲಾಗಿದೆ. ರೈಲು ಸಂಖ್ಯೆ 66505 (ಯಲಹಂಕ - ಅರಸೀಕೆರೆ): ಈ ರೈಲು ಬೆಳಿಗ್ಗೆ 06:45ಕ್ಕೆ ಯಲಹಂಕದಿಂದ ಹೊರಟು, ಬೆಳಿಗ್ಗೆ 11:00ಕ್ಕೆ ಅರಸೀಕೆರೆ ತಲುಪಲಿದೆ. ರೈಲು ಸಂಖ್ಯೆ 66506 (ಅರಸೀಕೆರೆ - ಯಲಹಂಕ): ಈ ರೈಲು ಮಧ್ಯಾಹ್ನ 02:15ಕ್ಕೆ ಅರಸೀಕೆರೆಯಿಂದ ಹೊರಟು, ರಾತ್ರಿ 07:15ಕ್ಕೆ ಯಲಹಂಕ ತಲುಪಲಿದೆ.
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಐದು ನಗರ ಪಾಲಿಕೆಗಳ ನೂತನ ಲೋಗೋಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಜಿಬಿಎ ವಬ್ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು.
Skip to content
‌                  SUDDISANGATHI DWANI
Menu
  • Home
  • ಮುಖ್ಯ ಸುದ್ದಿಗಳು
    • Free
      • Layout 1
      • Layout 2
      • Layout 3
    • Pro
      • Slider & Double Tiles
      • Slider, Tiles & Tab
      • Slider, Tiles & Trending
      • Slider, Trending & Tab
      • Slider & Tiles
      • Slider & Double Tabs
      • Slider & Single Trending
      • Slider & Double Trending
      • 3 Column Carousel
  • ಪ್ರಚಲಿತ
    • Wide Layout
      • Content – Primary Sidebar
      • Primary Sidebar – Content
      • Content Only
    • Narrow Layout
      • Content – Primary Sidebar
      • Primary Sidebar- Content
      • Content Only
  • ಅಂಕಣಗಳು
    • Free
      • Grid Layout
    • Pro
      • 3 Column Grid
      • 2 Column Grid
      • 4 Column Grid
      • Grid with Full
      • List with Full
      • List Alternative
      • Right Layout List
      • Masonry
      • Full Title After Image
      • Full Title Before Image
      • Full Title Over Image
  • ಪ್ರವಾಸ
    • Free
      • Reviewnews
      • Sport
      • Recipe
      • Chinese
      • Spanish
      • Arabic
      • Indian
      • Elementor
      • Gutenberg
      • Ministry of Culture
      • Green House
      • Peace Church
      • Gadget Craze
      • Atlas Escape
      • Central Edu
    • Pro
      • ReviewNews Pro
      • Sport Pro
      • Recipe Pro
      • Chinese Pro
      • Spanish Pro
      • Arabic Pro
      • General Pro
      • Fashion Pro
      • Books Pro
      • Japanese Pro
      • Automobile Pro
      • The Beatboulevard Pro
      • Blockspare Pro
      • Indian Pro
      • Gadgets Pro
      • The Daily Bloom Pro
      • Real Estate Pro
      • Gadgets Pro
      • Prime News Pro
      • Super Mag Pro
      • Clean Blog Pro
      • Blog Time Pro
      • City Mag Pro
      • Pharmacy News Pro
  • ಕಥೆ/ಕವನ
    • Blog
    • 1000+ Starter Template
    • 15+ Pro Themes
    • Elementor News Addons
    • Gutenberg Site Builder
    • Demo Site Importer
    • WP Post Author
  • ಇ ಮ್ಯಾಗಜೀನ್
    • WP Website Setup with InstaWP
    • Hindi News Website Tutorials
    • Build an Accessible News Site
    • Fast News Theme – CentralNews
    • Wix vs WordPress
  • ನಮ್ಮ ಬಗ್ಗೆ
Menu

ನಿಲ್ಲದ ಯುದ್ಧ: ವಿಶ್ವಸಂಸ್ಥೆ ಏನು ಮಾಡುತ್ತಿದೆ…!?

Posted on March 23, 2026

– ವಿವೇಕಾನಂದ ಹೆಚ್.ಕೆ.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಯೂನಿಯನ್ ಆಫ್ ಅರ್ಥ್ ( Union of Earth ) ಅಥವಾ ಯೂನಿಯನ್ ಆಫ್ ವರ್ಲ್ಡ್ ( Union of world ) ಎಂಬ ಸಂಘಟನೆ ಸ್ಥಾಪಿಸಿ ತಕ್ಷಣ ಕಾರ್ಯೋನ್ಮುಖರಾಗಿ …..

ಈಗ ಅತ್ಯಂತ ತುರ್ತಾಗಿ ವಿಶ್ವಕ್ಕೆ ಮತ್ತೊಂದು ಪ್ರಬಲ ನಾಯಕತ್ವದ ಸಂಸ್ಥೆ ಬೇಕಾಗಿದೆ. ಮೊದಲ ವಿಶ್ವ ಮಹಾ ಯುದ್ಧದ ನಂತರ ರಾಷ್ಟ್ರಗಳ ಸಂಘ ( League of nation ) ಅಸ್ತಿತ್ವಕ್ಕೆ ಬಂದಿತು. ಆದರೂ ಎರಡನೆಯ ಮಹಾಯುದ್ಧ ತಡೆಯಲು ಸಾಧ್ಯವಾಗಲಿಲ್ಲ. ಭೀಕರ ಯುದ್ಧ ನಡೆದೇ ಹೋಯಿತು. ಆ ನಂತರ ವಿಶ್ವಸಂಸ್ಥೆ ( United Nations Organisation ) ಅಸ್ತಿತ್ವಕ್ಕೆ ಬಂದಿತು. ಹಾಗೂ ಹೀಗೂ ಸುಮಾರು 80 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ವಿಶ್ವಸಂಸ್ಥೆ ಈಗ ಬಹುತೇಕ ನಿರ್ಜೀವವಾಗಿದೆ. ವಿಶ್ವ ಮೂರನೇ ಮಹಾ ಯುದ್ಧದ ಹೊಸ್ತಿಲಲ್ಲಿದೆ. ಸುಮಾರು 25 ದೇಶಗಳು ವಿವಿಧ ಭಾಗಗಳಲ್ಲಿ ನೇರ
ಯುದ್ಧದಲ್ಲಿ ತೊಡಗಿದ್ದರೆ, ಉಳಿದ ಎಲ್ಲಾ ದೇಶಗಳ ಮೇಲೆ, ಜನರ ಜೀವನದ ಮೇಲೆ ಯುದ್ಧ ಪರೋಕ್ಷ ಪರಿಣಾಮ ಬೀರಿ ಆತಂಕಕ್ಕೆ ದೂಡಿದೆ. ಭೂಮಿಯ ಒಟ್ಟು ವಾತಾವರಣ ತೀರಾ ಕಲುಷಿತವಾಗುತ್ತಿದೆ.

ಇದೀಗ ತೀರಾ ತುರ್ತಾಗಿ ಮತ್ತೊಂದು ಸಂಸ್ಥೆಯ ಅಗತ್ಯವಿದೆ. ಅದನ್ನು ಯೋಚಿಸುವ ಮೊದಲು ಕ್ಷಿಪ್ರವಾಗಿ ಯುದ್ಧದ ಕಾರ್ಮೋಡ ಹೋಗಲಾಡಿಸಲು ಎಲ್ಲಾ ದೇಶಗಳ ಪ್ರಮುಖ ಶಾಂತಿಪ್ರಿಯರ ಬಲವಾದ ಸಂಘಟನಾ ಪ್ರಯತ್ನ ಬೇಕಾಗಿದೆ.

ನನಗೆ ತುಂಬಾ ಆಶ್ಚರ್ಯವಾಗುತ್ತಿರುವುದು
ಎಲ್ಲಿಗೆ ಹೋದರು ಈಗಲೂ ಜೀವಂತವಿರುವ ನೊಬೆಲ್ ಶಾಂತಿ ಪುರಸ್ಕೃತರು. ಏಕೆಂದರೆ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತಿರುವುದೇ ವಿಶ್ವದ ಶಾಂತಿಯ ಸ್ಥಾಪನೆಗಾಗಿ. ಅವರೇ ಈ ಸಂದರ್ಭದಲ್ಲಿ ಮೌನವಾದರೆ ಈ ಭೂಮಂಡಲವನ್ನು ಈ ಹುಚ್ಚರಿಂದ ಕಾಪಾಡುವವರು ಯಾರು ? ಮೊದಲಿಗೆ ವಿಶ್ವದ ಈಗ ಬದುಕಿರುವ ಎಲ್ಲಾ ನೊಬೆಲ್ ಶಾಂತಿ ವಿಜೇತರು ಒಂದು ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು ಯುದ್ಧದಲ್ಲಿ ನೇರವಾಗಿ ಭಾಗವಹಿಸಿರುವ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಬೇಕು, ಮಾತುಕತೆ ಆರಂಭಿಸಬೇಕು. ಕನಿಷ್ಠ ಆ ನಿಟ್ಟಿನಲ್ಲಿ ಪ್ರಯತ್ನಗಳಾದರು ಸಾಗಲಿ. ಅದರ ಯಶಸ್ಸು, ಅಪಯಶಸ್ಸು ನಂತರ ನಿರ್ಧರವಾಗಲಿ. ಆದರೆ ಶಾಂತಿಯ, ಕದನ ವಿರಾಮದ ಮಾತುಕತೆಗಳಂತೂ ಆಗಲೇ ಬೇಕಾಗಿದೆ.

ಹಾಗೆಯೇ ಬೌದ್ಧ ಗುರು ದಲೈಲಾಮ , ಕ್ರೈಸ್ತ ಗುರು ಪೋಪ್, ಇಸ್ಲಾಮಿನ ಪರಮೋಚ್ಚ ಧರ್ಮಗುರು, ಭಾರತ ಮತ್ತು ಏಷ್ಯಾದ ಪ್ರಬಲ ನಾಯಕರು, ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖರು ಮುಂತಾದವರು ಸಹ ತಮ್ಮೆಲ್ಲಾ ಇತರ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ ಯುದ್ಧವನ್ನು ಕದನ ವಿರಾಮದವರೆಗೆ ತೆಗೆದುಕೊಂಡು ಹೋಗಲು ಪ್ರಯತ್ನಗಳನ್ನಾದರೂ ಪ್ರಾರಂಭಿಸಬೇಕು. ಅವರ ಮೇಲೆ ತೀವ್ರವಾಗಿ ಒತ್ತಡ ಹೇರಬೇಕಿದೆ.

ಈ ಕ್ರೂರಿ, ಮಾನಸಿಕ ಅಸ್ವಸ್ಥ, ಹುಚ್ಚರ ಸಂತೆಯಲ್ಲಿ ಶಾಂತಿ ಅಷ್ಟು ಸುಲಭವಲ್ಲ. ಎಲ್ಲರನ್ನೂ ಮೆಚ್ಚಿಸಲು ಸಾಧ್ಯವೂ ಇಲ್ಲ. ಆದರೆ ವಿಶ್ವಕ್ಕೊಂದು ಬಲಿಷ್ಠ ಸಂಘಟನೆಯೊಂದು ಬೇಕೇ ಬೇಕಾಗಿದೆ. ಅದು ವಿಶ್ವಸಂಸ್ಥೆಗೆ ಪರ್ಯಾಯವಾಗಬೇಕಿದೆ. ವಿಶ್ವದ ಎಲ್ಲಾ ದೇಶಗಳಲ್ಲಿಯೂ ಬಹುತೇಕ ಸುಪ್ರೀಂಕೋರ್ಟ್ ಮಾದರಿಯ ನ್ಯಾಯಾಲಯ ಅಸ್ತಿತ್ವದಲ್ಲಿದೆ. ಅದೇ ರೀತಿ ಇಡೀ ವಿಶ್ವವೇ ಒಪ್ಪುವ ಒಂದು ಬಲಿಷ್ಠ ನ್ಯಾಯಾಲಯವನ್ನು ಸ್ಥಾಪಿಸಬೇಕಾಗಿದೆ.

ಹೌದು, ಈಗಾಗಲೇ ಅಂತರಾಷ್ಟ್ರೀಯ ನ್ಯಾಯಾಲಯವಿದೆ. ಆದರೆ ಅದು ಸಹ ಸಂಪೂರ್ಣ ವಿಫಲವಾಗಿರುವುದರಿಂದ ಆ ಅನುಭವದ ಆಧಾರದ ಮೇಲೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ಬಲಿಷ್ಠ ಮತ್ತು ತಟಸ್ಥ ನ್ಯಾಯಾಧೀಶರ ನ್ಯಾಯಾಲಯವನ್ನು ಸ್ಥಾಪಿಸಬೇಕಾಗಿದೆ.

ಜೊತೆಗೆ ನ್ಯಾಟೋ ಕೂಟ, ವಾರ್ಸಾ ಒಪ್ಪಂದ, ಜಿ ಒಕ್ಕೂಟಗಳು, ವಿವಿಧ ಖಂಡಗಳ ಒಕ್ಕೂಟಗಳು ಸೇರಿ ಆದಷ್ಟು ಬೇಗ ಒಕ್ಕೂಟಗಳ ಒಕ್ಕೂಟ ರಚಿಸಿ ಸಮನ್ವಯ ಸಾಧಿಸಬೇಕಾಗಿದೆ.

ಇನ್ನೂ ಕೆಲವು ದಿನಗಳು ಹೀಗೆ ಪ್ರತಿಯೊಬ್ಬರು ಮೌನವಾಗಿದ್ದು ಯುದ್ಧದಾಹಿ ನಾಯಕರುಗಳ ಟ್ವೀಟ್ಗಳನ್ನು, ನೋಡುತ್ತಾ ಕುಳಿತರೆ ನಮ್ಮ ಬದುಕಿನ ಟ್ವೀಟ್ಗಳೇ ಇರುವುದಿಲ್ಲ.

80 ವರ್ಷಗಳಷ್ಟು ದೀರ್ಘಕಾಲ ವಿಶ್ವಸಂಸ್ಥೆ ಅಸ್ತಿತ್ವದಲ್ಲಿ ಇರುವುದರಿಂದ ಅದಕ್ಕೆ ಕೃತಜ್ಞತೆ ಸಲ್ಲಿಸಿ ವಿದಾಯ ಹೇಳುವ ಸಮಯ ಬಂದಿದೆ. ಏಕೆಂದರೆ ಅದೀಗ ಬಹುತೇಕ ನಿಸ್ತೇಜಿತವಾಗಿದೆ. ಯಾವುದೇ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಬೇಕಾಗುತ್ತದೆ. ಆದರೆ ವಿಶ್ವಸಂಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳಾಗದೆ ಕೆಲವೇ ಬಲಿಷ್ಠ ದೇಶಗಳು ಅದನ್ನು ರಚಿಸಿಕೊಂಡಿದ್ದವು. ವೀಟೋ ಎಂಬ ಸರ್ವಾಧಿಕಾರಿ ಅಧಿಕಾರ ಹೊಂದಿದ್ದವು. ಇದೀಗ ಕಾಲ ಬದಲಾಗಿದೆ, ಪರಿಸ್ಥಿತಿ ಬದಲಾಗಿದೆ, ಜಾಗತಿಕ ವಾತಾವರಣವು ಬದಲಾಗಿದೆ.

ಈಗ ಮತ್ತೊಂದು ಸಂಸ್ಥೆ ಬೇಕೇ ಬೇಕಾಗಿದೆ ಮತ್ತು ಹಿಂದಿನ ಅನುಭವಗಳ ಆಧಾರದ ಮೇಲೆ ಅದಕ್ಕೆ ಹೊಸ ಶಕ್ತಿ, ಹೊಸ ರೂಪ, ಹೊಸತನವನ್ನು ನೀಡಬೇಕಾಗುತ್ತದೆ. ವಿಶ್ವದ ಜನ ಈಗ ನಿಜಕ್ಕೂ ಧ್ವನಿ ಎತ್ತಬೇಕಾಗಿದೆ.

ಇದನ್ನು ಮರೆತು ಗ್ಯಾಸ್ ಸಿಲಿಂಡರ್ ಇಲ್ಲ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ, ಹಣ್ಣು, ತರಕಾರಿ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಯೋಚಿಸುತ್ತಾ ಕುಳಿತು, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಆಸಕ್ತರಾದರೆ ಕೊನೆಗೆ ನಮ್ಮ ಜೀವವೇ ಉಳಿಯುವುದಿಲ್ಲ. ಈ ಭೂಮಿಯೂ ಉಳಿಯುವುದಿಲ್ಲ. ಆದ್ದರಿಂದ ಇಡೀ ಜಗತ್ತಿನ ಜನ ಈ ನಿಟ್ಟಿನಲ್ಲಿ ಬೇಗ ಯೋಚಿಸಬೇಕಾಗಿದೆ.

ಲೇಖಕರು: ವಿವೇಕಾನಂದ ಕೆ.ವಿ,

ಅದಕ್ಕಾಗಿ ಈ ಸಂದೇಶವನ್ನು ವಿಶ್ವಸಂಸ್ಥೆ ನೋಬೆಲ್ ಪುರಸ್ಕಾರ ಸಮಿತಿ, ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಹನೀಯರು, ವಿಶ್ವದ ಎಲ್ಲಾ ದೇಶಗಳ ಮುಖ್ಯಸ್ಥರು ಮುಂತಾದವರಿಗೆ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಮತ್ತು ಇ-ಮೇಲ್ ಮೂಲಕ ಕಳಿಸಿ ಕೊಡಬೇಕಾಗಿದೆ. ಈಗಲ್ಲದಿದ್ದರೆ ಮತ್ತೆಂದೂ ಸಾಧ್ಯವಿಲ್ಲ ಎಂಬ ಮನೋಭಾವದೊಂದಿಗೆ ಜಗತ್ತಿನ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಮತ್ತೊಂದು ಮಹಾ ಯುದ್ಧವನ್ನು, ಅಣುಬಾಂಬುಗಳ ಹೊಡೆತವನ್ನು ತಡೆಯಬಹುದು. ಇಲ್ಲದಿದ್ದರೆ ವಿನಾಶಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆಯ ಮನವಿ ಮಾಡಿಕೊಳ್ಳುತ್ತಾ…….
ಯುದ್ಧ ನಿಲ್ಲಿಸಿ,
ಭೂಮಿ ರಕ್ಷಿಸಿ,
ಕದನ ವಿರಾಮ ಘೋಷಿಸಿ…

Leave a Reply Cancel reply

Your email address will not be published. Required fields are marked *

Download
please subscribe SUDDISANGATHI DWANI youtube channel
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

SUDDISANGATHI

https://www.youtube.com/@suddisangathi

AF themes

Build Your Website in Minutes with One-Click Import – No Coding Hassle! 1000+ Expert Starter Sites & Templates for Stunning Newspaper, Magazine, Blog, and Publishing Websites.

We mainly focus on quality code and elegant design with incredible support. Our WordPress themes and plugins empower you to create an elegant, professional, and easy-to-maintain website in no time at all.

Categories

E-PAPER e magazine Health Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಲೇಟೆಸ್ಟ್‌ ನ್ಯೂಸ್

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ನ್ಯೂಸ್
©2026 ‌ SUDDISANGATHI DWANI | Design: Newspaperly WordPress Theme

WhatsApp us

Website security powered by MilesWeb